ಕರ್ವಾಲೋ
ಪೂರ್ಣಚಂದ್ರ_ತೇಜಸ್ವಿ ಅವರ ಅದ್ವಿತೀಯ ಕೃತಿ.
ಕರ್ವಾಲೋ ಎಂದರೆ ನೆನಪಾಗುವುದು ಹಾರುವ_ಓತಿ, ಪ್ರೊಫೆಸರ್_ಕರ್ವಾಲೋ, ಮಂದಣ್ಣ, ಬಿರಿಯಾನಿ_ಕರಿಯಪ್ಪ, ಎಂಗ್ಟ, ಕಿವಿ, ಪ್ಯಾರ, ಮೂರರ_ಮುಂದೆ_ಏಳು_ಸೊನ್ನೆ & ತೇಜಸ್ವಿ...
" ಕರ್ವಾಲೋ ಇದು ಹಾರುವ ಓತಿಕ್ಯಾತನ ಬೆನ್ನತ್ತಿ ಹೋಗುವ ಹೆಸರಾಂತ ವಿಜ್ಞಾನಿ ಮತ್ತು ಹಳ್ಳಿಯಲ್ಲಿ ನಡೆಯುವ ಈ ಘಟನೆಯ ಸುತ್ತ ಸುತ್ತುವ ಕಥೆ.."
ಕರ್ವಾಲೋ ಎನ್ನುವುದು ಒಬ್ಬ ಜೀವಶಾಸ್ತ್ರಜ್ಞರು ಪ್ರಸಿದ್ಧ ವಿಜ್ಞಾನಿಯ ಹೆಸರು.ಇವರು ಮೂಡಿಗೆರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ..ಇವರ ಪ್ರಿಯಾ ಶಿಷ್ಯ ಹಳ್ಳಿಯ ಗಮಾರ ಮಂದಣ್ಣ.. ಈ ಕಾದಂಬರಿಯ ಕೇಂದ್ರನೇ ಈ ಮಂದಣ್ಣ. ಮಂದಣ್ಣ ಕಾಡುಗೀಡು ಅಲೆಯುತ್ತ ಬೆಳೆದಿರುವ ಅದ್ಭುತ ಯುವಕ..ಇವನಿಗೆ ಕಾಡು-ಕಾಡಿನಲ್ಲಿರುವ ಪ್ರಾಣಿಗಳ ಚಲನವಲನಗಳ ಬಗ್ಗೆ ಅಗಾಧವಾದ ತಿಳುವಳಿಕೆ ಇರುತ್ತೆ.ಈ ಕಾರಣಕ್ಕಾಗಿಯೇ ಕರ್ವಾಲೋ ಇವನನ್ನು ತನ್ನ ಶಿಷ್ಯ ಮಾಡಿಕೊಂಡಿರುತ್ತಾರೆ. ಮೂಡಿಗೆರೆಯ ಜನ ಮಹಾನ್ ವಿಜ್ಞಾನಿ ಕರ್ವಾಲೋ & ದಡ್ಡ ತರ್ಲೆ ಮಂದಣ್ಣನ ನಡುವಿನ ಸಂಬಂಧ ಏನಿರಬಹುದು ಎಂದು ಕುತೂಹಲ ಅನುಮಾನದಿಂದ ನೋಡುತ್ತಿದ್ದರು. ಹೀಗೆ ಆಶ್ಚರ್ಯ ಸಂಶಯ ಕುತೂಹಲದಿಂದ ನೋಡುವವರಲ್ಲಿ ತೇಜಸ್ವಿ ಸಹ ಒಬ್ಬರು..ಇದೇ ಕುತೂಹಲವೇ ತೇಜಸ್ವಿ ಅವರಿಗೆ ಪ್ರೊ||ಕರ್ವಾಲೋ ಪರಿಚಯವಾಗಲು ಕಾರಣವಾಗುತ್ತೇ..
ಈ ಕೃತಿಯಲ್ಲಿ ಮಲೆನಾಡಿನ ಜೀವನದ,ಮಂದಣ್ಣನ ಮದುವೆ, ಜೇನುಸಾಕಾಣಿಕೆಯ, ಕಳ್ಳಭಟ್ಟಿಯ ವ್ಯವಸ್ಥೆ-ಅವ್ಯವಸ್ಥೆ, ವಿಜ್ಞಾನಿಗಳ ಅನ್ವೇಷಣೆಯನ್ನರಿಯದ ಪೋಲೀಸರೂ ಅವರ ಜತೆ ಯಾರ್ಯಾರು ಕೆಲಸ ಮಾಡುತ್ತಿದ್ದಾರೆಂಬುದನ್ನು ಪತ್ತೆಹಚ್ಚಲು ಮುಂದಾಗುವ ಸಂದರ್ಭ, ಅದಕ್ಕಾಗಿ ಜೇನು ಹುಳಿ ಬಂದ ಮಡಕೆಯನ್ನು ತನ್ನದೇ ಎಂದುದಕ್ಕಾಗಿ ಮಂದಣ್ಣ ಕಳ್ಳಭಟ್ಟಿಯನ್ನು ತಯಾರಿಸುತ್ತಿದ್ದನೆಂದು ಕೇಸು ಹಾಕಿ ಅವನನ್ನು ಬಂಧಿಸುವ ಸಂದರ್ಭ, ಏನೇನೋ ಮಾಡಿ ಕಷ್ಟಪಟ್ಟು ಆತನನ್ನು ಬಿಡಿಸಿಕೊಂಡು ಬರುವ ಯೋಜನೆ ಹಾಕಿದ ಕರ್ವಾಲೋ, ಈ ವಿಜ್ಞಾನಿ ಯಾವುದೋ ಒಂದು ಮಹಾತ್ಕಾರ್ಯದ ಸಲುವಾಗಿಯೇ ಆತನನ್ನು ಬಿಡಿಸಿಕೊಂಡು ಬರಲು ಹರಸಾಹಸಪಡುತ್ತಿದ್ದಾರೆ ಎಂಬುದನ್ನರಿತ ತೇಜಸ್ವಿ ತಾನೂ ಧೈರ್ಯಗೊಂಡು ಆತನನ್ನು ಬಿಡಿಸಲು ಕೋರ್ಟಿನಲ್ಲಿ ಸಾಕ್ಷಿ ಹೇಳುವುದಕ್ಕಾಗಿ ಒಪ್ಪಿಕೊಂಡದ್ದು..
ಮೂರರ ಮುಂದೆ ಏಳು ಸೊನ್ನೆಗಳಷ್ಟು ವರ್ಷ ಹಳೆಯದಾದ ಹಾರುವ ಓತಿಯ ಪ್ರಬೇಧವನ್ನರಸಿಕೊಂಡು ಮಲೆನಾಡಿನ ದಟ್ಟ ಕಾಡಿನಲ್ಲಿ ಹೋಗುವ ತಂಡ.. ಮಂದಣ್ಣ, ಛಾಯಾಚಿತ್ರಕಾರ ಪ್ರಭಾಕರ, ಮರ ಹತ್ತುವುದರಲ್ಲಿ ನಿಪುಣನಾಗಿದ್ದ ಬಿರಿಯಾನಿ ಕರಿಯಪ್ಪ, ಕರ್ವಾಲೋ, ತೇಜಸ್ವಿ,ನಾಯಿ ಕಿವಿ, ತಪ್ಪಿಸಿಕೊಂಡ ಎಮ್ಮೆಯನ್ನು ಹುಡುಕುತ್ತಾ ಬಂದು ಇವರ ಜತೆ ಸಿಕ್ಕಿಹಾಕಿಕೊಂಡ ಎಂಗ್ಟ ಹೀಗೆ ಪುಟ್ಟದಾದ ಹಾರುವ ಓತಿಯ ಬೆನ್ನಟ್ಟಿ ಒಂದು ತಂಡವೇ ಹೋಗಿತ್ತು.
ಈ ತಂಡಕ್ಕೆ ಆ ಅಪರೂಪದ ಹಾರುವ_ಓತಿ_ಸಿಕ್ಕಿತೇ!!??? ,ಅದನ್ನು ಪತ್ತೆ ಮಾಡಲು ಏನೆಲ್ಲ ಪ್ರಯತ್ನ ಮಾಡುತ್ತಾರೆ ಎಂಬ ಕುತೂಹಲವಿದ್ದರೆ ಪುಸ್ತಕ ಓದಿ..🙏🏻
ತೇಜಸ್ವಿಯವರ ಕರ್ವಾಲೋ ಪುಸ್ತಕ ಸರಾಗವಾಗಿ ಓದಿಸಿಕೊಂಡು ಹೋಗಿ ಅದರದ್ದೇ ಆದ ಒಂದು ಲೋಕದಲ್ಲಿ ಸುತ್ತು ಹಾಕಿಸಿಕೊಂಡು, ಆ ಲೋಕವನ್ನು ಪರಿಚಯಿಸುತ್ತಾ ಬರುತ್ತದೆ..
ಅದ್ಬುತವಾದ ಕಾದಂಬರಿ..👌

No comments:
Post a Comment