ಬೆಟ್ಟದ ಜೀವ
ಡಾ.ಕೆ.ಶಿವರಾಮ ಕಾರಂತರು
ಬೆಟ್ಟದ ಜೀವ ಕಾರಂತರ ರಚನೆಯಲ್ಲಿ ಮೂಡಿಬಂದ ಅಪೂರ್ವವಾದ ಕೃತಿ..
ಮಗನನ್ನು ಕಳೆದುಕೊಂಡ ವೃದ್ಧ ದಂಪತಿಗಳು ಅವರ ಮಗನಿಗಾಗಿ ಹಂಬಲಿಸುವ ಕಥಾವಸ್ತು ಇಲ್ಲಿದೆ..
ಶಿವರಾಮರು ಕಾಡಿನಲ್ಲಿ ಹಾದಿ ತಪ್ಪಿದಾಗ ಅವರು ಕಡೆಬೈಲು ಎಂಬಲ್ಲಿ ತಂಗುವ ಪ್ರಸಂಗ ಬರುತ್ತದೆ..
ವೃದ್ಧ ದಂಪತಿಗಳಾದ ಗೋಪಾಲಯ್ಯ ಭಟ್ಟರು & ಶಂಕರ್ರಮ್ಮರ ಆತಿಥ್ಯ ಸವಿಯುವ ಅವರ ಮನೆಯಲ್ಲಿ ಉಳಿದುಕೊಳ್ಳವ ಅವಕಾಶ ದೊರೆಯುತ್ತದೆ..
ಗೋಪಾಲಯ್ಯರು ಅರವತ್ತರ ಆಸುಪಾಸಿನ ಗಟ್ಟಿಗರು..ಇವರೇ ಈ ಬೆಟ್ಟದ ಜೀವ ಎನ್ನಬಹುದು. ಕಾಡನ್ನು ಕಡಿದು ತೋಟ ಮಾಡಿರುವ ಇವರು ಈ ಪ್ರಾಯದಲ್ಲೂ ತರುಣನ್ನು ನಾಚಿಸುವ ಹುಮ್ಮಸ್ಸು ಅವರದ್ದು..
ಕಾರಂತರೇ ಹೇಳುವಂತೆ " ಬೆಟ್ಟದ ಹೊಟ್ಟೆಯಲ್ಲಿ ಹುಟ್ಟಿದ ಈ ಮನುಷ್ಯ, ಬೆಟ್ಟದಷ್ಟು ಎತ್ತರಕ್ಕೆ ಬೆಳೆದಿದ್ದಾನೆ.ಮನಸ್ಸೂ ಹಾಗೆ;ಮಾನವೂ ಹಾಗೆ.. " ಬಯಸದೇ ಅತಿಥಿಯಾಗಿ ಬಂದ ಶಿವರಾಮರಿಗೆ ಇವರು ತೋರಿಸುವ ಪ್ರೀತಿ ಅಷ್ಟಿಷ್ಟಲ್ಲ.. ಇವರಿಗೆ ಒಬ್ಬ ಮಗಳು & ಮಗನಿರುತ್ತಾನೆ. ಮಗಳು ಅವಳ ಹೆರಿಗೆಯ ಸಮಯದಲ್ಲಿ ತೀರಿಹೋಗುತ್ತಾಳೆ.. ಇದ್ದ ಒಬ್ಬ ಮಗನೂ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿರುತ್ತಾನೆ. ಅವನ ಬರುವ ನಿರೀಕ್ಷೆಯಲ್ಲೇ ದಂಪತಿಗಳು ದಿನ ಕಳೆಯುತ್ತಿರುತ್ತಾರೆ. ಹನ್ನೆರಡು ವರ್ಷಗಳಿಂದ ಮಗನನ್ನು ಕಾಣದ ಶಂಕರಮ್ಮ ಮಗನಿಗಾಗಿ ಹಂಬಲಿಸುವುದು ಅವನು ಎಲ್ಲದರೂ ಕಂಡರೇ ಮನೆಗೆ ಹೋಗುವಂತೆ ತಿಳಿಸಲು ಶಿವರಾಮರಿಗೆ ಬೇಡಿಕೊಳ್ಳವುದು ಅವರು ಮಗನ ಮೇಲಿನ ಪ್ರೀತಿ ತೋರಿಸುತ್ತದೆ..
ಕಾದಂಬರಿ ಇಂದಿನ ಕಾಲಕ್ಕೂ ಪ್ರಸ್ತುತ ಎನ್ನಿಸುತ್ತದೆ. ಹೆತ್ತವರನ್ನು ಬಿಟ್ಟು ಹೋಗುವ ಮಕ್ಕಳು, ತಂದೆ-ತಾಯಿಗಳನ್ನು ಕಡೆಗಣಿಸುವವರ ಇಂದಿಗೂ ಕೂಡ ಇದ್ದರೆ,ಅಂತಹವರು ಇದನ್ನು ಒಮ್ಮೆ ಓದಿದರೇ ಹೆತ್ತವರ ನೋವು ಸಂಕಟಗಳ ಅರಿವಾಗುತ್ತದೆ.
ಬೆಟ್ಟದ ಜೀವ ಕಾದಂಬರಿಯಲ್ಲಿ ಬರುವ ಪಕೃತಿಯ ವರ್ಣನೆ ಹುಲಿ ಬೇಟೆ,ಕುರ್ಪು,ಪಂಜ,ಅಭ್ಯಂಜನ,ಕಾಯಿಹುಳಿ,ಕುಮಾರ ಪರ್ವತದ ವರ್ಣನೆ ಬಣ್ಣಿಸಲಸದಳ, ಅದೆಷ್ಟು ಬಾರಿ ಓದಿದರೂ ಕಾದಂಬರಿಯ ಆ ಅಪೂರ್ವ ಚೆಲುವು ಚಿರ ನೂತನವೇ.
ಈ ಕಾದಂಬರಿ ಆಧಾರಿತ ಚಲನಚಿತ್ರ ಇದೆ.ಓದಲು ಸಮಯ ಇಲ್ಲದಿದ್ದರೆ ಒಮ್ಮೆ ಈ ಸಿನಿಮಾ ನೋಡಿ..
https://youtu.be/Y0u8-Qd-_0s
ನಾನು ಕಾದಂಬರಿ ಓದುವ ಮೊದಲೇ ಹಲವು ಬಾರಿ ಸಿನಿಮಾ ನೋಡಿದ್ದೆ.ಕಾದಂಬರಿಗಿಂತ ಸಿನಿಮಾ ಸ್ವಲ್ಪ ಬದಲಾವಣೆ ಇದೆ.ಆದರೆ ಕಥಾವಸ್ತುವನ್ನು ಸೊಗಸಾಗಿ ತೋರಿಸಿದ್ದರೆ.ಸಿನಿಮಾ ನೋಡುವುದಕ್ಕಿಂತಲೂ ಕಾದಂಬರಿ ಓದಿ ಸವಿಯುವದೇ ಮೇಲು..
ಡಾ.ಕೆ.ಶಿವರಾಮ ಕಾರಂತರು
ಬೆಟ್ಟದ ಜೀವ ಕಾರಂತರ ರಚನೆಯಲ್ಲಿ ಮೂಡಿಬಂದ ಅಪೂರ್ವವಾದ ಕೃತಿ..
ಮಗನನ್ನು ಕಳೆದುಕೊಂಡ ವೃದ್ಧ ದಂಪತಿಗಳು ಅವರ ಮಗನಿಗಾಗಿ ಹಂಬಲಿಸುವ ಕಥಾವಸ್ತು ಇಲ್ಲಿದೆ..
ಶಿವರಾಮರು ಕಾಡಿನಲ್ಲಿ ಹಾದಿ ತಪ್ಪಿದಾಗ ಅವರು ಕಡೆಬೈಲು ಎಂಬಲ್ಲಿ ತಂಗುವ ಪ್ರಸಂಗ ಬರುತ್ತದೆ..
ವೃದ್ಧ ದಂಪತಿಗಳಾದ ಗೋಪಾಲಯ್ಯ ಭಟ್ಟರು & ಶಂಕರ್ರಮ್ಮರ ಆತಿಥ್ಯ ಸವಿಯುವ ಅವರ ಮನೆಯಲ್ಲಿ ಉಳಿದುಕೊಳ್ಳವ ಅವಕಾಶ ದೊರೆಯುತ್ತದೆ..
ಗೋಪಾಲಯ್ಯರು ಅರವತ್ತರ ಆಸುಪಾಸಿನ ಗಟ್ಟಿಗರು..ಇವರೇ ಈ ಬೆಟ್ಟದ ಜೀವ ಎನ್ನಬಹುದು. ಕಾಡನ್ನು ಕಡಿದು ತೋಟ ಮಾಡಿರುವ ಇವರು ಈ ಪ್ರಾಯದಲ್ಲೂ ತರುಣನ್ನು ನಾಚಿಸುವ ಹುಮ್ಮಸ್ಸು ಅವರದ್ದು..
ಕಾರಂತರೇ ಹೇಳುವಂತೆ " ಬೆಟ್ಟದ ಹೊಟ್ಟೆಯಲ್ಲಿ ಹುಟ್ಟಿದ ಈ ಮನುಷ್ಯ, ಬೆಟ್ಟದಷ್ಟು ಎತ್ತರಕ್ಕೆ ಬೆಳೆದಿದ್ದಾನೆ.ಮನಸ್ಸೂ ಹಾಗೆ;ಮಾನವೂ ಹಾಗೆ.. " ಬಯಸದೇ ಅತಿಥಿಯಾಗಿ ಬಂದ ಶಿವರಾಮರಿಗೆ ಇವರು ತೋರಿಸುವ ಪ್ರೀತಿ ಅಷ್ಟಿಷ್ಟಲ್ಲ.. ಇವರಿಗೆ ಒಬ್ಬ ಮಗಳು & ಮಗನಿರುತ್ತಾನೆ. ಮಗಳು ಅವಳ ಹೆರಿಗೆಯ ಸಮಯದಲ್ಲಿ ತೀರಿಹೋಗುತ್ತಾಳೆ.. ಇದ್ದ ಒಬ್ಬ ಮಗನೂ ಹೇಳದೇ ಕೇಳದೇ ಮನೆ ಬಿಟ್ಟು ಹೋಗಿರುತ್ತಾನೆ. ಅವನ ಬರುವ ನಿರೀಕ್ಷೆಯಲ್ಲೇ ದಂಪತಿಗಳು ದಿನ ಕಳೆಯುತ್ತಿರುತ್ತಾರೆ. ಹನ್ನೆರಡು ವರ್ಷಗಳಿಂದ ಮಗನನ್ನು ಕಾಣದ ಶಂಕರಮ್ಮ ಮಗನಿಗಾಗಿ ಹಂಬಲಿಸುವುದು ಅವನು ಎಲ್ಲದರೂ ಕಂಡರೇ ಮನೆಗೆ ಹೋಗುವಂತೆ ತಿಳಿಸಲು ಶಿವರಾಮರಿಗೆ ಬೇಡಿಕೊಳ್ಳವುದು ಅವರು ಮಗನ ಮೇಲಿನ ಪ್ರೀತಿ ತೋರಿಸುತ್ತದೆ..
ಕಾದಂಬರಿ ಇಂದಿನ ಕಾಲಕ್ಕೂ ಪ್ರಸ್ತುತ ಎನ್ನಿಸುತ್ತದೆ. ಹೆತ್ತವರನ್ನು ಬಿಟ್ಟು ಹೋಗುವ ಮಕ್ಕಳು, ತಂದೆ-ತಾಯಿಗಳನ್ನು ಕಡೆಗಣಿಸುವವರ ಇಂದಿಗೂ ಕೂಡ ಇದ್ದರೆ,ಅಂತಹವರು ಇದನ್ನು ಒಮ್ಮೆ ಓದಿದರೇ ಹೆತ್ತವರ ನೋವು ಸಂಕಟಗಳ ಅರಿವಾಗುತ್ತದೆ.
ಬೆಟ್ಟದ ಜೀವ ಕಾದಂಬರಿಯಲ್ಲಿ ಬರುವ ಪಕೃತಿಯ ವರ್ಣನೆ ಹುಲಿ ಬೇಟೆ,ಕುರ್ಪು,ಪಂಜ,ಅಭ್ಯಂಜನ,ಕಾಯಿಹುಳಿ,ಕುಮಾರ ಪರ್ವತದ ವರ್ಣನೆ ಬಣ್ಣಿಸಲಸದಳ, ಅದೆಷ್ಟು ಬಾರಿ ಓದಿದರೂ ಕಾದಂಬರಿಯ ಆ ಅಪೂರ್ವ ಚೆಲುವು ಚಿರ ನೂತನವೇ.
ಈ ಕಾದಂಬರಿ ಆಧಾರಿತ ಚಲನಚಿತ್ರ ಇದೆ.ಓದಲು ಸಮಯ ಇಲ್ಲದಿದ್ದರೆ ಒಮ್ಮೆ ಈ ಸಿನಿಮಾ ನೋಡಿ..
https://youtu.be/Y0u8-Qd-_0s
ನಾನು ಕಾದಂಬರಿ ಓದುವ ಮೊದಲೇ ಹಲವು ಬಾರಿ ಸಿನಿಮಾ ನೋಡಿದ್ದೆ.ಕಾದಂಬರಿಗಿಂತ ಸಿನಿಮಾ ಸ್ವಲ್ಪ ಬದಲಾವಣೆ ಇದೆ.ಆದರೆ ಕಥಾವಸ್ತುವನ್ನು ಸೊಗಸಾಗಿ ತೋರಿಸಿದ್ದರೆ.ಸಿನಿಮಾ ನೋಡುವುದಕ್ಕಿಂತಲೂ ಕಾದಂಬರಿ ಓದಿ ಸವಿಯುವದೇ ಮೇಲು..
