ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Friday, October 3, 2025

ಕಾಂತರ - ಅಧ್ಯಾಯ ೧

                       ಕಾಂತರದೊಳ ಹೊಕ್ಕಾಗ

ಕಾಂತರ ಎಂಬ ಅದ್ಭುತ ಪ್ರಪಂಚ ಸೃಷ್ಟಿಸಿ, ದೈವ ಆರಾಧನೆ, ದುಷ್ಟ ಸಂಹಾರ ಸಂರಕ್ಷಣೆ ಎಂಬ ಕಥಾಹಂದರದಿಂದ ಮನ್ನಣೆ ಗಳಿಸಿದ ನಂತರ ಮತ್ತೊಮ್ಮೆ ಕಾಂತಾರದ ಹಿಂದಿನ ಕಥೆಯೊಂದಿಗೆ ಹೊಸ ಅವತಾರದಲ್ಲಿ ಬಂದ ಸಿನಿಮಾ ಮತ್ತೆ ದೈವ, ದೈವಾರಾಧನೆ, ಉಳ್ಳವರು ಮತ್ತು ಇಲ್ಲದವರ ನಡುವಿನ ಸಂಘರ್ಷವನ್ನು ಅದ್ಭುತವಾಗಿ ತೆರೆಯ ಮೇಲೆ ಚಿತ್ರಿಸಿ ಸಿನಿರಸಿಕರಿಗೆ ರಸದೌತಾಣವನ್ನು ಉಣಬಡಿಸಿದ ನಮ್ಮ ರಿಶಬ್ ಶೆಟ್ಟ್ರಿಗೆ ಸಿನಿಮಾ ತುಂಬಾ ಯಶಸ್ಸು ಕಾಣಲಿ ಎಂದು ಹಾರೈಸೋಣ..
ಕಾಂತರ ಸಿನಿಕತೆ ಪ್ರಕೃತಿ ಮತ್ತು ಮನುಷ್ಯನ ನಡುವಿನ ಸಂಘರ್ಷದ ಕತೆ ಹೇಳುತ್ತದೆ..
ಪ್ರಕೃತಿಯೊಂದಿಗೆ ಬಾಳುವ ಜನರೊಂದೆಡೆ ಆದರೆ ಅದೇ ಪ್ರಕೃತಿಯನ್ನು ಗೆಲ್ಲಲು ವಶಪಡಿಸಿಕೊಳ್ಳಲು ಹವಣಿಸುವ ಗುಂಪೊಂದೆಡೆ..
ಪ್ರಕೃತಿಗೆ ಸಮತೋಲನವನ್ನು ಕಾಪಾಡಿಕೊಳ್ಳುವ ಸಾಮರ್ಥ್ಯ ಉಂಟು.. ದೈವದ ಭಕ್ತಿ,ಭಯದ ಕಾರಣದಿಂದಲೂ ಸಹ ಪ್ರಕೃತಿಯ ಹಾಳಾದೇ ಉಳಿದಿದೆ ಎನ್ನಬಹುದು..
ಮರ,ಗಿಡ,ಪ್ರಾಣಿ,ಪಕ್ಷಿಗಳನ್ನು ಪೂಜಿಸುವ ಧರ್ಮ ನಮ್ಮದಾಗಿದ್ದು, ಅನೇಕ ದೇವಾನುದೇವತೆಗಳ ವಾಹನದ ರೂಪದಲ್ಲೊ ಆಭರಣದ ರೂಪದಲ್ಲೋ ನಾವು ಪ್ರಾಣಿಗಳನ್ನು ಕಾಣುತ್ತೇವೆ ಇದರ ಹಿನ್ನಲೆ ಆ ದೇವರ ಭಯದಿಂದಾದರೂ ಅವುಗಳನ್ನು ಕೊಲ್ಲದೆ ಅವುಗಳ ಸಂತತಿ ಉಳಿಯಲಿ ಎಂಬ ಆಶಾ ಭಾವನೆ...
ಭೂಮಿಯಲ್ಲಿ ಯಾವಾಗ ಅನಾಚಾರ,ಅಧರ್ಮ ಹೆಚ್ಚಾಗುತೋ ಆಗ ದೇವರು ನಾನಾ ಅವತಾರದಿಂದ ಧರೆಗೆ ಬರುವನು/ತನ್ನ ಗಣವನ್ನು ಕಳುಹಿಸಿ ಇಲ್ಲಿ ಸಮತೋಲನ ಕಾಪಾಡುವನು.. 
ವರಹ,ನಂದಿ,ನರಸಿಂಹ,ವ್ಯಾಘ್ರ ಹೀಗೆ ಹಲವು ಅವತಾರವೆತ್ತ ಕತೆಗಳನ್ನು ನಾವು ಕೇಳಿದ್ದೆವೆ..
ಈ ಸಿನಿಮಾದಲ್ಲೂ ಸಹ ಅರಸನು ಕಾಂತರದಲ್ಲಿರುವ ತೋಟವನ್ನು ವಶಪಡಿಸಿಕೊಳ್ಳಲು ಬಯಸುವನು,ಕಾಂತರದ ಒಳಗಿದ್ದು ಬದುಕುವ ಜನರನ್ನು ಹೊಡೆದು ಆಳಲು ನೋಡುವನು ಅಂತಿಮವಾಗಿ ದೈವ ಕಾಂತರದ ಮುಗ್ಧ ಜನರ ಪರವಾಗಿದ್ದು,ಕಪಟಿ ಮೋಸಗಾರರ ಅಂತ್ಯವಾಗುತ್ತದೆ..
ಸಿನಿಮಾದ ಉದ್ದಕ್ಕೂ ದೃಶ್ಯ ವೈಭವಗಳು ನಮ್ಮನ್ನು ಕಾಂತರ ಲೋಕಕ್ಕೆ ಕರೆದೊಯ್ಯುತ್ತವೆ.. ರಥದ ಮೇಲಿನ ದೃಶ್ಯ, ಮಧ್ಯಂತರದ ಸಮಯದಲ್ಲಿನ ಹುಲಿ ದೃಶ್ಯ, ಗುಳಿಗನ ನಾನಾ ಅವತಾರಗಳ ದೃಶ್ಯ ಮತ್ತೆ ಕ್ಲೈಮಾಕ್ಸ್ ದೃಶ್ಯಗಳು ಹಾಲಿವುಡ್ ಸಿನಿಮಾವನ್ನು ಮೀರಿಸುವ ಮಟ್ಟಕ್ಕಿವೆ ಇದು ಅತೀಶಯೋಕ್ತಿ ಅಲ್ಲ ನೀವು ಸಿನಿಮಾ ನೋಡಿದಾಗ ನಿಮಗೂ ಇದು ಅನುಭವ ಆಗುತ್ತದೆ..
ಒಂದೊಂದು ದೃಶ್ಯ ಅದರ ಹಿನ್ನಲೆಯಲ್ಲಿನ ಮ್ಯುಸಿಕ್ ಅದ್ಬುತವಾಗಿದೆ.. ಸಿನಿಮಾದ ಪ್ರತಿ ಪಾತ್ರಗಳಲ್ಲಿ ಅಭಿನಯಿಸಿದ ಕಲಾವಿದರು ಪಾತ್ರಕ್ಕೆ ಜೀವ ತುಂಬಿದ್ದಾರೆ, ಶಟ್ರಿಗೆ ಆಸ್ಕರ್ ಕೊಟ್ರೂ ಕಡಿಮೆನೇ ಹಾಗಿದೆ ಅವರ ಅಭಿನಯ ಮತ್ತು ನಿರ್ದೇಶನ.. ಇನ್ನೊಂದು ಏನು ವಿಶೇಷ ಅಂದರೆ ನೀವು ಶಟ್ರು ಎಲ್ಲಾ ಸಿನಿಮಾ ನೋಡಿದ್ರೆ ಸಾಮಾನ್ಯವಾಗಿ ಕಲಾವಿದರೆಲ್ಲಾರೂ ಅವರೇ ಇರುತ್ತಾರೆ ಈ ಸಿನಿಮಾದಲ್ಲಿ ಅವರಿಗೆ ಹಾಕಿರುವ ಗೆಟಪ್‌ನಲ್ಲಿ ಅವನ್ನು ಗುರುತಿಸವುದು ಕಷ್ಟ ಅಷ್ಟೊಂದು ಚೆನ್ನಾಗಿ ಮೇಕಪ್ ಮಾಡಿದ್ದಾರೆ ಸಿನಿಮದಲ್ಲಿ ಅವನ್ನು ಹುಡುಕಿ ಗುರುತಿಸಿ ನಾನಂತು ಖುಷಿಪಟ್ಟೆ...

ಹಡಗು ತೇಲುಸುವವನಿಗೆ ಮುಳುಗಿಸುದು ಗೊತ್ತು, ಕೋಟೆ ಕಟ್ಟಿದವನಿಗೆ ಅದನ್ನು ಕೇಡುವುದೂ ಸಹ ಗೊತ್ತು, ಈ ಮಾತುಗಳ ಮನುಷ್ಯನ ತಾನು ತನ್ನದು ಅಹಂಕಾರಕ್ಕೆ ಹಿಡಿದ  ಕನ್ನಡಿಯಂತಿವೆ..

ಆದಷ್ಟೂ ಬೇಗ ನಿಮ್ಮ ಹತ್ತಿರದ ಸಿನಿಮಂದಿರಗಳಲ್ಲಿ ಚಿತ್ರ ನೋಡಿ..‌
#kantara #HombaleFilms #shetty_rishab #KantaraChapter1