![]() |
| ಸುಯೋಧನ & ತಾಯಿ ಗಾಂಧರಿ |
ಸುಯೋಧನ (ದುರ್ಯೋಧನ)
ನೀರೊಳಗಿರ್ದಮ್_ಬೆಮರ್ಥಮ್_ಉರಗಪತಾಕ!!!!
ಆ ದಿನ ಕನ್ನಡ ಮೇಷ್ಟ್ರು ಈ ಸಾಲು ಹೇಳ್ದಾಗ ಕಣ್ಣಲ್ಲಿ ನೀರಿತ್ತು. ಮಹಾಭಾರತದಲ್ಲಿ ಅಧಿಕೃತವಾಗಿ ಒಳ್ಳೆಯ ವ್ಯಕ್ತಿತ್ವಗಳು ಎಂದು ತೋರಿಸಿದ್ದು ಪಾಂಡವರನ್ನು , ಎಲ್ಲೋ ಒಂದು ಕಡೆ ಕತೆಯನ್ನ ಮುಂದುವರಿಸಿದಾಗ ನನಗೆ ಇಷ್ಟ ಆಗಿದ್ದು ಸುಯೋಧನ ಮತ್ತು ಕರ್ಣ.ಹಾಗಾಗಿ, ಎಲ್ಲೋ ಒಂದು ಕಡೆ ಕವಿ, ಸುಯೋಧನ ಭೀಮನಿಗೆ ಹೆದರಿ ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತ ಎಂದಾಗ ಹೃಧಯ ಅದನ್ನು ಒಪ್ಪೊಲ್ಲ. ಅಧಿಕೃತವಾಗಿ ಭೀಮಾರ್ಜುನರನ್ನು ನಾಯಕರನ್ನಾಗಿ ವರ್ಣಿಸಿದಾಗಲೂ ನಮ್ಮಲ್ಲಿ ನಾಯಕರಾಗಿ ಉಳಿಯೋದು ಕರ್ಣ ಮತ್ತು ಸುಯೋಧನ.ಸುಯೋಧನ ವಜ್ರಕಾಯ ತನ್ನತಾಯಿಯಲ್ಲಿ ಆಶೀರ್ವಾದ ಪಡೆಯುವಾಗ ಬೆತ್ತಲೆಯಾಗಿ ತಾಯಿಯಲ್ಲಿ ಹೋಗುತ್ತಾನೆ ಇತ್ತ ತಾಯಿ ತನ್ನ ಮಗನನ್ನ ವಜ್ರಕಾಯನಾಗಲಿ ಎಂದು ಹರಿಸುತ್ತಾಳೆ. ಮುಂದಿನ ಯೋಜನೆಯ ಅರಿವಿದ್ದ ಕೃಷ್ಣ ಸುಯೋಧನಿಗೆ ಮಾನವನ್ನಾದ್ರೂ ಮುಚ್ಚಿಕೊಂಡು ತಾಯಿಯ ಬಳಿ ಹೋಗು ಎಂದು ಪ್ರೇರೇಪಿಸುತ್ತಾನೆ. ಸಂಚು ಅರಿಯದ ಮುಗ್ಧ ಸುಯೋಧನ ಬಾಳೆಯಲ್ಲಿ ತನ್ನ ಮಾನವನ್ನು ಮುಚ್ಚಿಕೊಂಡು ತಾಯಿಯ ಬಳಿ ಹೋಗುತ್ತಾನೆ. ಇದರಿಂದಾಗಿ ಸುಯೋಧನ ಅರ್ಧ ವಜ್ರಕಾಯ. ತೊಡೆಯ ಬಳಿ ಅವನು ವಜ್ರಕಾಯನಲ್ಲ. ಮುಂದೆ ಯುದ್ಧರಂಗದಲ್ಲಿ ಗದಾಯುದ್ಧದಲ್ಲಿ ಭೀಮ ಸೋತು ನಿಂತಾಗ, ಇದೆ ಕೃಷ್ಣ ತನ್ನ ತೊಡೆಯನ್ನೂ ತಟ್ಟುವುದರ ಮೂಲಕ ಭೀಮನನ್ನು ಸುಯೋಧನನ ತೊಡೆ ಮುರುಯುವಂತೆ ನಿರ್ದೇಶಿಶುತ್ತಾನೆ. ಆದರೆ ಗದಾಯುಧ್ಧದಲ್ಲಿ ತೊಡೆಗೆ ಹೊಡೆಯುವಂತಿಲ್ಲ ನಮ್ಮ ನಾಯಕ ಅನಿಸಿಕೊಂಡವ ಯುಧ್ದದ ನಿಯಮವನ್ನು ಉಲ್ಲೇಖಿಸಿ ಕುತಂತ್ರದಿಂದ ಸುಯೋಧನನು ತನ್ನ ಸಾವನ್ನು ನೋಡುವಂತೆ ಮಾಡುತ್ತಾನೆ. ಬೆಟ್ಟದಂತ ಜೀವ, ವೀರ ಜೀವ ತನಗಾದ ಮೋಸದ ಅರಿವಿಲ್ಲದೆ ಮಣ್ಣನ್ನು ಮುಟ್ಟತ್ತೆ....

No comments:
Post a Comment