ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Saturday, September 7, 2019

ಮಹಾ ಪಲಾಯನ - ಪೂರ್ಣಚಂದ್ರತೇಜಸ್ವಿ


*ಮಹಾ ಪಲಾಯನ* ಇದು ಸ್ಲಾವೋಮಿರ್ ರಾವಿಸ್‌ರವರ *ದಿ ಲಾಂಗ್ ವಾಕ್* ಪುಸ್ತಕದ ಅನುವಾದ..
ಸ್ಲಾವೋಮಿರ್ ಸೈಬೀರಿಯಾದಲ್ಲಿರುವ ರಷ್ಯನ್‌ರ ಜೈಲಿನಿಂದ ಪಾರಾಗಿ ಬಂದ ರೋಚಕ ಕಾದಂಬರಿಯಾಗಿದೆ.. ಸ್ಲಾವೋಮಿರ್ ಸ್ವಾತಂತ್ರ್ಯವನ್ನು ಅರಸಿ ಕ್ರಮಿಸಿದ ದೂರ ನಾವು ಊಹಿಸಲು ಕಷ್ಟ... ಸೈಬೀರಿಯಾ,ಗೋಬಿ ಮರುಭೂಮಿ,ಟಿಬೆಟ್, ಹಿಮಾಲಯ ಹೀಗೆ ಅವರು ಸಾವಿರಾರು ಮೈಲಿ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ ಭಾರತ ತಲುಪುವ ರೀತಿ ಭಾರತೀಯರಲ್ಲಿ ನಮ್ಮ ನಾಡಿನ ಬಗ್ಗೆ ಧನ್ಯತೆ ಮೂಡಿಸುತ್ತದೆ..
ನಾವು ಸಾಗುತ್ತಿರುವ ದಾರಿ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಅರಿವಿಲ್ಲ..
ಆಧುನಿಕತೆಯತ್ತ ಸಾಗುವ ಭರಾಟೆಯಲ್ಲಿ ಮಾನವೀಯ ಮೌಲ್ಯಗಳನ್ನು ಬಿಟ್ಟು ಎಂತಹ ಹೊಲಸು ಯುಗದತ್ತ ಹೆಜ್ಜೆ ಹಾಕುತ್ತಾ ಸಾಗುತ್ತಿರುವುದು ವಿಷಾದಕರ..
ಮನುಷ್ಯ ಆಧುನಿಕತೆಯತ್ತ ಮುನ್ನುಗುವ ಭರದಲ್ಲಿ ನಮ್ಮ ನೈತಿಕ,ಮಾನವೀಯ ಮೌಲ್ಯವನ್ನು  ಬದಿಗೊತ್ತಿ ಪ್ರಾಣಿಗಳನ್ನು ಮಾತ್ರವಲ್ಲ ಮನುಷ್ಯ ಮನುಷ್ಯನನ್ನು ಕೊಲ್ಲುವುದಕ್ಕೂ ಹೇಸುವುದಿಲ್ಲ;ಇದೆನಾ ನಾಗರಿಕತೆಯ ಸಂಸ್ಕೃತಿ?!
ಇಂತಹ *ಹೇಯ ಸಂಸ್ಕೃತಿಯ ನಾಗರಿಕನಾಗಿ ಬಾಳುವುದಕ್ಕಿಂತ ಮಾನವೀಯತೆ ಇರುವ ಅನಾಗರಿಕ ಎನ್ನಿಸಿಕೊಳ್ಳವುದೇ ಲೇಸು*..ಕಾಡುಮೇಡಿನಲ್ಲಿ ವಾಸಿಸುವ ಬುಡಕಟ್ಟು ಜನ ಬಡವರಾದರೂ ಅನಾಗರೀಕರೆನ್ನಿಸಿಕೊಂಡರೂ ಪ್ರೀತಿ,ವಿಶ್ವಾಸ,ಸ್ನೇಹ ಇತ್ಯಾದಿಗಳಲ್ಲಿ ನಾಗರಿಕ ಪ್ರಪಂಚಕ್ಕಿಂತ ಸಾವಿರಾರು ಪಾಲು ಮೇಲು..
ನಾವು ಮರಳಿ ದಿಗಂತದಿಂದ ದಿಗಂತಕ್ಕೆ ಕಾಲೆಳೆಯುತ್ತಾ ಹಿಂದಿರುಗುವುದಲ್ಲೇ ನಮ್ಮ ಉಳಿವು ಇದೆ.
ಸೈಬೀರಿಯನ್ ಜೈಲಿನ ಪಲಾಯನದಿಂದ ಪಯಣ ಪಾಶ್ಚಾತ್ಯ & ಪೌರಾತ್ಯ ರಾಷ್ಟ್ರಗಳಲ್ಲಿರುವ ಮಾನವೀಯತೆ ಅಂತರವನ್ನು ತಿಳಿಸುತ್ತದೆ.. ಅಂದು ಜಗತ್ತಿಗೆ ಉದಾತ್ತ ಮೌಲ್ಯಗಳನ್ನು ನೀಡಿದ ನಮ್ಮ ದೇಶದ ಇಂದಿನ ಮನಸ್ಥಿತಿ ನಿಜಕ್ಕೂ ಶೋಚನೀಯವಾಗಿದೆ..
ಒಟ್ಟಿನಲ್ಲಿ *ಹಿಡಿದ ಗುರಿಯನ್ನು ಸಾಧಿಸುವ ಸ್ಲಾವೋಮಿರ್‌ನಲ್ಲಿನ ಅದಮ್ಯ ಚೇತನ ನಮ್ಮೆಲ್ಲರಿಗೂ ಸ್ಪೂರ್ತಿ ಆಗಲಿ*🙏🏻🙏🏻
ಪುಸ್ತಕ ಒಮ್ಮೆ ಓದಿ..

No comments: