ಒಂದು ಶಾಲೆಗೆ ಶೈಕ್ಷಣಿಕ ತನಿಕೆಗಾಗಿ BEO ಆಕಸ್ಮಿಕವಾಗಿ ಬಂದರು. ಅವರನ್ನು ನೋಡಿದ ಮುಖ್ಯೋಪಾಧ್ಯಾಯರು ಓಡುತ್ತಾ ಗೇಟಿನಡೆಗೆ ಬಂದು ಅವರನ್ನು ಸ್ವಾಗತಿಸಿದರು. ಇದನ್ನು ಕಂಡ ವಿದ್ಯಾರ್ಥಿ BEO ಮುಖ್ಯೋಪಾಧ್ಯಾಯರಿಗಿಂತಾ ಅತಿ ದೊಡ್ಡ ವ್ಯಕ್ತಿ ಯೆಂದು ತಿಳಿದ.
ಅಷ್ಟರಲ್ಲೇ ಅದೇ ದಾರಿಯಲ್ಲಿ ಸಾಗುತಿದ್ದ DDPI ಸಹಾ ಕಾರು ನಿಲ್ಲಿಸಿ ಶಾಲೆಯ ತಪಾಸಣೆ ಗೆಂದು ಬಂದರು. ಇದನ್ನು ನೋಡಿ,ಮುಖ್ಯೋಪಾಧ್ಯಾಯರು,BEO ಒಟ್ಟಿಗೆ ಓಡುತ್ತಾ ಶಾಲೆಯ ಆವರಣದತ್ತಾ ಓಡುತ್ತಾ ಬಂದು ಅವರನ್ನು ಸ್ವಾಗತಿಸಿದರು.ಇದನ್ನು ಕಂಡ ವಿದ್ಯಾರ್ಥಿ BEO ಗಿಂತಾ DDIP ಅತಿ ದೊಡ್ಡ ಅಧಿಕಾರಿ ಇರಬಹುದೆಂದು ಯೋಚಿಸಿದ.
ಅಷ್ಟರಲ್ಲೇ ಕಾಕತಾಳೀಯವೋ ಎಂಬಂತೆ ಶಿಕ್ಷಣ ಕಾರ್ಯದರ್ಶಿ ಗಳ ಕಾರು ಆ ದಾರಿಯಲ್ಲಿ ಸಾಗುವಾಗ DDPI, BEO ಕಾರುಗಳನ್ನ ಕಂಡ ಶಿಕ್ಷಣ ಕಾರ್ಯದರ್ಶಿ ತಮ್ಮ ಕಾರನ್ನು ನಿಲ್ಲಿಸಿ ಶಾಲೆಯತ್ತ ಬರುವುದನ್ನು ಕಂಡು ಗಡಿಬಿಡಿಯಿಂದ ಧಾವಿಸಿ ಅತಿ ನಮ್ರತೆಯಿಂದ ಸ್ವಾಗತಿಸಿದರು. ಇದನ್ನು ಕಂಡ ವಿದ್ಯಾರ್ಥಿ DDIP ಗಿಂತಾ ಶಿಕ್ಷಣ ಕಾರ್ಯದರ್ಶಿ ಇನ್ನೆಷ್ಟು ದೊಡ್ಡ ಅಧಿಕಾರಿ ಇರಬಹುದೆಂದು ಯೋಚಿಸಿದ. ಇನ್ನು ಸರಿಯೇ ಶಿಕ್ಷಣ ಮಂತ್ರಿಗಳು ಬಂದಾಗಲಂತೂ ಎಲ್ಲಾ ಅಧಿಕಾರಿಗಳು ಒಟ್ಟಿಗೆ ಅತಿ ಭಯ ಭಕ್ತಿಗಳಿಂದ ಬರ ಮಾಡಿಕೊಂಡರು. ವಿದ್ಯಾರ್ಥಿಯ ಆಶ್ಚರ್ಯಕ್ಕೆ ಪಾರವೇ ಇಲ್ಲದಂತಾಯಿತು. ನಿಶ್ಚಯಿಸಿಯೇ ಬಿಟ್ಟ ಆಗುವುದಾದರೆ ಮಂತ್ರಿಯೇ ಆಗಬೇಕೆಂದು.
ಅಷ್ಟರಲ್ಲಿ ಶಾಲಾ ತಪಾಸಣೆ ಮುಗಿಯಿತು. ಮಂತ್ರಿಗಳು ಎದ್ದು ಶಾಲೆಯ ಪಕ್ಕದಲ್ಲಿರುವ ಒಂದು ಸಣ್ಣ ಸಂದಿಯಲಿ ನಡೆಯತೊಡಗಿದರು. ಮಂತ್ರಿ ಗಳನ್ನು ಹಿಂಬಾಲಿಸುತ್ತಾ ಎಲ್ಲರೂ ಒಂದು ಚಿಕ್ಕ ಮನೆಯೊಳಗೆ ನಡೆದರು. ಆ ಮನೆಯಲ್ಲಿ ಒಂದು ಚಿಕ್ಕ ಮಂಚದ ಮೇಲೆ ಕೃಷವಾದ ಶರೀರ ದೊಂದಿಗೆ ವ್ಯಕ್ತಿಯೊಬ್ಬರು ಮಲಗಿದ್ದರು. ಮಂತ್ರಿಗಳು ಆ
ವ್ಯಕ್ತಿಯ ಕಾಲನ್ನು ಮುಟ್ಟಿ ನಮಸ್ಕರಿಸಿದರು, ಎಲ್ಲಾ ಅಧಿಕಾರಿಗಳು ಸಹಾ ಅವರ ಕಾಲಿಗೆ ನಮಸ್ಕರಿಸಿ ಅವರಿಂದ ಆಶೀರ್ವಾದ ಪಡೆದರು. ಇದನ್ನೆಲ್ಲಾ ಕಂಡ ವಿದ್ಯಾರ್ಥಿ ಆಶ್ಚರ್ಯಚಕಿತನಾದ. ಆ ಕೃಷ ವ್ಯಕ್ತಿ ಈ ಮಂತ್ರಿ ಮತ್ತು ಎಲ್ಲಾ ಅಧಿಕಾರಿಗಳಿಗೆ ವಿದ್ಯೆ ನೀಡಿದ ಗುರುವಾಗಿದ್ದರು. ಆ ವಿದ್ಯಾರ್ಥಿ ಆಂದೇ ನಿಶ್ಚಯಿಸಿ ಬಿಟ್ಟ ಆಗುವುದಾದರೆ ಎಲ್ಲರೂ ಗೌರವಿಸುವ ಉತ್ತಮ ಶಿಕ್ಷಕನಾಗಬೇಕೆಂದು.
ಶಿಕ್ಷಕರನ್ನು ಮತ್ತು ಶಿಕ್ಷಕ ವೃತ್ತಿಯನ್ನುಎಲ್ಲರೂ ಗೌರವಿಸೋಣ.
💐🙏💐🙏💐🙏💐

No comments:
Post a Comment