ಪುಸ್ತಕಗಳ ಬಗ್ಗೆ ಹೆಚ್ಚು ತಿಳಿಯಲು ಈ ಬ್ಲಾಗ್ ಫಾಲೋ ಮಾಡಿ

Saturday, November 23, 2019

ಮರಣದ ಬಳಿಕ ದುರ್ಯೋಧನ ಹೋಗಿದ್ದು ಸ್ವರ್ಗಕ್ಕೆ ಪಾಂಡವರು ಹೋಗಿದ್ದು ನರಕದ ಕಡೆ. ಆಶ್ಚರ್ಯವಾದರು ಇದು ಸತ್ಯ

ದುರ್ಯೋಧನ ಸ್ವರ್ಗಕ್ಕೆ ಬರುತ್ತಾನೆ ಅಲ್ಲೇ ಇದ್ದ ಯುಧಿಷ್ಠಿರ ಇಲ್ಲಿ ದುರ್ಯೋಧನನನ್ನು ಯಾಕೆ ಕರೆತಂದಿದ್ದಿರ ಆತ ಪಾಪಿ ಹಲವಾರು ರಾಜರುಗಳ ಸಾವಿಗೆ ಕಾರಣನಾಗಿದ್ದಾನೆ.
ನಾರದ ನಕ್ಕು ಹೇಳುತ್ತಾನೆ ಯುಧಿಷ್ಠಿರ ದುರ್ಯೋಧನ ಸ್ವರ್ಗಕ್ಕೆ ಬರಲು ಕಾರಣವೇನು ಎಂದು ನಾನು ಹೇಳುತ್ತೇನೆ ಕೇಳು.
ದುರ್ಯೋಧನ ರಾಜರುಗಳಿಗೆ ಪ್ರಿಯನಾದ ವ್ಯಕ್ತಿ ಹಾಗೇ ಯುದ್ದದಲ್ಲಿ ರಾಜರೋಷವಾಗಿ ಹೋರಾಡಿದ್ದರಿಂದ ಅವನ ಆತ್ಮ ಶುದ್ದಿಯಾಗಿದೆ. ಕ್ಷತ್ರಿಯನಾಗಿ ಹುಟ್ಟಿ ಭಯವಿಲ್ಲದಂತೆ ಹೋರಾಡಿದನು.ಯುದ್ದ ಮಾಡುತ್ತ ಸತ್ತ ಕ್ಷತ್ರಿಯನಯಲ್ಲ ಪಾಪಗಳು ಶಿಕ್ಷೆಗೆ ಅರ್ಹವಲ್ಲ.
ನಾರದ ನಕ್ಕು ಇದು ಸ್ವರ್ಗ ಇಲ್ಲಿ ದ್ವೇಷಕ್ಕೆ ಅವಕಾಶವಿಲ್ಲ. ದುರ್ಯೋಧನನೆ ಸ್ವರ್ಗಕ್ಕೆ ಬಂದಿರುವಾಗ ನನ್ನ ಸಹೋದರರು ನ್ಯಾಯದ ಪಥದಲ್ಲಿ ನಡೆದವರು ಅವರ್ಯಾಕೆ ಸ್ವರ್ಗದಲಿಲ್ಲ ಎಂದು ಪ್ರಶ್ನಿಸಿದ.
ಅದಕ್ಕೆ ಉತ್ತರಿಸಿದ ನಾರದ ಭೀಮನ ಅತಿಯಾದ ಜಂಬ ತನದಿಂದ ಆತ ಸ್ವಲ್ಪಕಾಲ ನರಕದಲ್ಲಿ ಇರಬೇಕಾಯಿತು.ಅರ್ಜುನನಿಗೆ ಏಕಲವ್ಯ ಮತ್ತು ಕರ್ಣನ ಮೇಲಿದ್ದ ಅತಿಯಾದ ಅಸೂಯೆಯಿಂದ ನರಕದಲ್ಲಿರಬೇಕಾಯಿತು. ನಕುಲನಿಗಿದ್ದ ತನ್ನ ದೇಹ ಸೌಂದರ್ಯದ ಮೇಲಿನ ಅಹಂಯಿಂದ ನರಕ ಅನುಭವಿಸಬೇಕಾಯಿತು. ಸಹದೇವನಿಗೆ ತನ್ನ ಕಾಲಜ್ನಾನ ಮತ್ತು ಅರಿವಿನ ಬಗ್ಗೆ ಗರ್ವವಿತ್ತು ಈ ಕಾರಣಕ್ಕಾಗಿ ನರಕ ಅನುಭವಿಸಬೇಕಾಯಿತು.
ತನ್ನ ಪತಿಯರ ಮೇಲಿನ ಸಮಪಾಲು ಪ್ರೀತಿಯಲ್ಲಿ ಅರ್ಜುನನ ಮೇಲೆ ತೋರಿಸಿದ ಅತಿಯಾದ ಪ್ರೀತಿಯಿಂದ ನರಕ ಅನುಭವಿಸಬೇಕಾಯಿತು. ಕರ್ಣ ದುರ್ಯೋಧನಿಗೆ ಕೊಟ್ಟ ಭಾಷೆಯನ್ನು ಮುರಿದಿದ್ದಕ್ಕಾಗಿ ನರಕ ಅನುಭವಿಸಬೇಕಾಯಿತು.

No comments: